ಗೆಲುವು


ನೋಡು ಗೆಳೆಯ ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ
ಬಿತ್ತಿರುವುದ ಬೆಳೆಯಲೆಂದು
ಗಾಳಿಮಳೆಯು ಜೀಕುತಿದೆ.
ಅದಕಂತೆಯೆ ಎದೆಯುದ್ದಕೆ
ಹೊಲದ ನಿಲುವು ತೂಗುತಿದೆ
ಕಾರ್‍ಗಾಲದ ಹೊಸ ಹೊಂಚಿದು;
ಕಾಲಪುರುಷನೊಳಸಂಚಿದು :
ಬಾನಂಗಳಕೇಳ್ವುದೆನಲು
ಮುಗಿಲೆ ನೆಲಕೆ ಬಾಗುತಿದೆ !
ನೋಡು, ಗೆಳೆಯ ! ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ.


ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.
ಬಂತೆ ಕ್ರಾಂತಿಯೆಂದು ಹಿಗ್ಗಿ
ಲೋಕವೆಲ್ಲ ಕೇಳುತಿದೆ.
ನಲಿದು ಸತ್ಯ ಪಥವ ತೋರಿ
ಋಷಿವೃಂದವು ಬಾಳುತಿದೆ
ಸ್ವಾತಂತ್ರ್ಯದ ಸವಿಯುಸಿರಿದು
ಸಮತೆ ಹೊತ್ತ ಹೊಂಬಸಿರಿದು.
ಜಗವು- ಬರುವುದನ್ನು ನೆನೆದು
ಬಂದಿಹುದನು ತಾಳುತಿದೆ !
ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.


ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !
ಅಳಿಗಾಲವೆ ಇದು ಕೊನೆಯೆ ?
ಮುಂದುವರಿಸು ಹಾಡನು !
ಇಂದಿಗಿಲ್ಲಿ ಕಟ್ಟಿ ಬಿಡುವ
ನಾಡ ಕಟ್ಟು ಪಾಡನು !
ಇಂದಿನ ನುಡಿ ಗುಡುಗು ಸಿಡಿಲು
ಅದಕದೋ ! ಅವಿದ್ಯೆ ಮಡಿಲು.
ನಾಡೆದೆ ಮಂಥಿಸುತ್ತ ತರುವ
ಚಂದ್ರನಂಥ ಕೋಡನು !
ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !


ನೋಡು ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
ನಾಡಿನೊಲವ ನಾಡ ಗೆಲುವ
ಕೊರಲತುಂಬ ಸಾರುತಿವೆ.
ಉಜ್ಜೀವನದುಡ್ಯಾಣದಿ
ತಮ್ಮನೆ ತಾವ್ ಮೀರುತಿವೆ :
ಇರಲಿದೆಮ್ಮ ಜೀವನ
ಆಗಲಿಂತು ವಾವನ
ನೋಡು! ದಿವ್ಯ ಭವ್ಯ ಶಕ್ತಿ
ಕಾಳನೊಡನೆ ಹೋರುತಿವೆ!
ಮತ್ತೆ ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದೊ, ಶ್ರಾವಣ ಬಂದಿದೆ!
Next post ಕತೆಗಾಗಿ ಜತೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys